top of page

ಸೂರ್ಯ ಮುಕುಂದರಾಜ್

ವಕೀಲರು. ತುಮಕೂರು ಗ್ರಾಮಾಂತರ

ಸೂರ್ಯ ಮುಕುಂದರಾಜ್, ವೃತ್ತಿಯಲ್ಲಿ ವಕೀಲರು.

 

ಜೊತೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕುಗಳ ವಿಭಾಗದ ಪ್ರಧಾನ ಕಾರ್ಯದರ್ಶಿಗಳು.

ಅಲ್ಲದೆ, ಇತ್ತೀಚೆಗೆ ಕರ್ನಾಟಕ ರಾಜ ಕಾನೂನು ವಿಶ್ವ ವಿದ್ಯಾಲಯ, ಹುಬ್ಬಳ್ಳಿ., ನಾಮ ನಿರ್ದೇಶಿತ ಸದಸ್ಯರು.

 

ತುಮಕೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸೂರ್ಯ, ಕನ್ನಡಪರ, ಸಾಮಾಜಿಕ ನ್ಯಾಯದ ಪರವಿರುವ, ಆಧುನಿಕ ತಂತ್ರಜ್ಞಾನದ ಒಳಿತು ಕೆಡುಕುಗಳ ಬಗೆಗೆ ಅರಿವು ಹೊಂದಿರುವ, ಜನರ ಬದುಕಿನ ಗುಣಮಟ್ಟ ಹೆಚ್ಚಿಸಲು ಬಯಸುವ ಯುವ ರಾಜಕೀಯ ನಾಯಕರು.​

ರಾಜಕೀಯ ಕ್ಷೇತ್ರದಲ್ಲಿ, ವಕೀಲರು, ಸದ್ಯದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಕೆಪಿಸಿಸಿಯ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕುಗಳ ವಿಭಾಗದ ಅಧ್ಯಕ್ಷರಾದ, ಶ್ರೀ. ಎ. ಎಸ್. ಪೊನ್ನಣ್ಣರವರು ಹಾಗು ಕೆಪಿಸಿಸಿ ಅಧ್ಯಕ್ಷರು ಮತ್ತು ಇಂದಿನ ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿಗಳು ಆಗಿರುವ ಶ್ರೀ. ಡಿ.ಕೆ. ಶಿವಕುಮಾರ್ ರವರ ಮಾರ್ಗದರ್ಶನದಲ್ಲಿ, ಸಾಮಾಜಿಕ ಹಿತಕ್ಕಾಗಿ ಮತ್ತು ಪಕ್ಷದ ಹೋರಾಟಗಾರ ಕಾರ್ಯಕರ್ತರ ಪರವಾಗಿ, ಹಲವಾರು ಕಾನೂನು ಸಂಭಂದಿತ ಮತ್ತು ಚುನಾವಣಾ ಸಂಬಂಧಿತ ಕೆಲಸಗಳನ್ನು ನಿರ್ವಹಿಸಿದ ಅನುಭವ ಸೂರ್ಯ ಅವರಿಗಿದೆ. ಮೇಕೆದಾಟು ಹೋರಾಟದಲ್ಲಿ ಭಾಗಿಯಾದ ಕಾರ್ಯಕರ್ತರ ಪ್ರಕರಣಗಳನ್ನು ಸೂರ್ಯ ಅವರು, ತಮ್ಮ ಕೆಪಿಸಿಸಿ ಕಾನೂನು ಘಟಕದ ಸಹೋದ್ಯೋಗಿಗಳಾದ ಸಂಜಯ್ ಯಾದವ್ ಮತ್ತು ಸಿದ್ದರಾಜು ಬಿ.ಎಸ್ ಅವರ ಜೊತೆಗೂಡಿ ನಿರ್ವಹಿಸಿದ್ದಾರೆ.

img_1_1733128620463.jpg

ಅಲ್ಲದೆ, ಇವತ್ತಿನ ಇಂಟರ್ನೆಟ್ ಯುಗದಲ್ಲಿ ಸುಳ್ಳು ಸುದ್ದಿಗಳು ನಮ್ಮ ದೇಶದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ಮೇಲೆ ಬೀಳುತ್ತಿರುವ ದುಷ್ಪರಿಣಾಮಗಳನ್ನು ತಡೆಯಲು, ಬಿಜೆಪಿಯ ಅಪಪ್ರಚಾರದ ವಿರುದ್ಧ ಹಲವಾರು ದೂರುಗಳನ್ನು ಸೂರ್ಯ ನೀಡಿದ್ದಾರೆ. 2023ರ ವಿಧಾನ ಸಭೆಗೆ, ತಮ್ಮ ಹಿರಿಯರ ಹುಟ್ಟೂರಾದ ತುಮಕೂರು ಗ್ರಾಮಾಂತರ ಕ್ಷೇತ್ರದ ಚುನಾವಣಾ ಟಿಕೆಟ್ ಆಕಾಂಕ್ಷಿಯಾಗಿದ್ದ ಸೂರ್ಯ ಅವರು, ಟಿಕೆಟ್ ಪಡೆಯಲು ಮುನ್ನೆಲೆಯಲ್ಲಿದ್ದ ಸ್ಪರ್ಧಿಯಾಗಿದ್ದರು.

 

ಇದೇ ಚುನಾವಣೆಯಲ್ಲಿ ಕೆಪಿಸಿಸಿ ವಾರ್ ರೂಮ್ ನ ಕಾನೂನು ಉಸ್ತುವಾರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದೇ ಅಲ್ಲದೆ, ರಾಜ ರಾಜೇಶ್ವರಿ ನಗರದ ಸ್ಪರ್ಧಿಯಾದ ಕುಸುಮಾ ಹನುಮಂತರಾಯಪ್ಪ ಅವರ ಚುನಾವಣಾ ಕಾನೂನು ಪ್ರತಿನಿಧಿಯಾಗಿ ತಳಮಟ್ಟದಲ್ಲಿ ಕೆಲಸ ಮಾಡಿದ ಅನುಭವ ಕೂಡ ಸೂರ್ಯ ಅವರಿಗಿದೆ.

IMG-20241130-WA0001.jpg

ಸಾಮಾಜಿಕ ಮತ್ತು ರಾಜಕೀಯ ಕಾಳಜಿಗಳು

ಇದು ಈ ಶತಮಾನದ ಹೊಸ ಭಾರತಕ್ಕೆ ಮುನ್ನುಡಿ ಬರೆಯುವ ಕಾಲ

Untitled

ಕನ್ನಡ ಭಾಷೆ ಮತ್ತು ಸರ್ಕಾರಿ ಗುಣಮಟ್ಟದ ಶಿಕ್ಷಣ

ಸೂರ್ಯ ಮುಕುಂದರಾಜ್ ಕನ್ನಡದಲ್ಲಿ ಗುಣಮಟ್ಟದ ಶಿಕ್ಷಣ ಕೊಡುವ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಸ್ವತಃ ಕನ್ನಡ ಮಾಧ್ಯಮದಲ್ಲಿ ಓದಿದ ಸೂರ್ಯ, ಮತ್ತು ಅವರ ಪತ್ನಿ ಶೃತಿ, ಅವರ ಮಗ ಆದ್ಯತ್ ನನ್ನು ಕೂಡ ಕನ್ನಡದ ಸರ್ಕಾರಿ ಶಾಲೆಯಲ್ಲಿ ಓದಿಸುತ್ತಿದ್ದಾರೆ. 

ನಮ್ಮ ಸರ್ಕಾರಗಳು, ಆಡಳಿತ ಉತ್ತಮವಾದ ದಿನ ಅತ್ಯುನ್ನತ ಶಿಕ್ಷಣವನ್ನು ಕೊಡುವ ಸಂಸ್ಥೆಗಳು ಸರ್ಕಾರಿ ಸಂಸ್ಥೆಗಳೇ ಆಗಿದ್ದು, ಅವು ಎಲ್ಲ ಜನರಿಗೆ ಸಿಗುವ ಉತ್ತಮ ಗುಣಮಟ್ಟದ ಕಲಿಕೆಯನ್ನು ಕಡಿಮೆ ಖರ್ಚಿನಲ್ಲಿ ಕೊಡಬಹುದು ಎಂಬುದು ಸೂರ್ಯ ಅವರ ನಂಬಿಕೆ.


ಸೂರ್ಯ ಅವರ ರಾಜಕೀಯ ಹೋರಾಟದ ಮುಖ್ಯ ಗುರಿಗಳಲ್ಲಿ ಒಂದು, ಸರ್ಕಾರಿ ಮತ್ತು ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವುದು, ಅದಕ್ಕಾಗಿ ಕೆಲಸ ಮಾಡುವ ಜನರ ಜೊತೆ ಕೈ ಜೋಡಿಸುವುದು ಕೂಡ ಆಗಿದೆ.

ಸಾಮಾಜಿಕ ಹೋರಾಟದ ಹಿನ್ನೆಲೆ

ತನ್ನ ಕಾಲೇಜ್ ದಿನಗಳಲ್ಲೇ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡ ಸೂರ್ಯ, ಸ್ವತಃ ಸಾಮಾಜಿಕ ಕಾಳಜಿಯುಳ್ಳ ಹಿನ್ನಲೆಯುಳ್ಳ ಕುಟುಂಬದಿಂದ ಬಂದವರು.
ಕನ್ನಡಪರ, ದುರ್ಬಲರ ಪರ ಹಾಗೂ ಸಂವಿಧಾನ ಕೊಟ್ಟ ಜನರ ಹಕ್ಕುಗಳ ಎತ್ತಿ ಹಿಡಿಯಲು ಹಲವಾರು ಸಂಘಟನೆಗಳ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Untitled
Untitled

ಸಂವಿಧಾನ ಪರ

ಮೂಲತಃ ವೃತ್ತಿಯಲ್ಲಿ ನ್ಯಾಯವಾದಿಗಳಾದ ಸೂರ್ಯ ಹಿರಿಯ ವಕೀಲರಾದ ಶ್ರೀ ಸಿ. ಎಚ್. ಹನುಮಂತರಾಯ ಅವರ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಜನರು ತಮ್ಮ ಹಕ್ಕುಗಳ ಅರಿತಾಗ ಮಾತ್ರ ನಮ್ಮ ದೇಶದಲ್ಲಿ ಸಂವಿಧಾನದ ಅತ್ಯುತ್ತಮ ಅಳವಡಿಕೆಯಾಗಿ, ಈಗಿರುವ ವ್ಯವಸ್ತೆಯನ್ನು ಬದಲಿಸಲು ಸಾಧ್ಯ ಎಂದು ನಂಬಿಕೆಯುಳ್ಳವರು. 


ಆದ್ದರಿಂದ ಯಾವುದೇ ವಿಷಯದ ಮಂಡನೆಯಲ್ಲಿ ಅದು ಸಂವಿಧಾನಬದ್ಧವಾಗಿದೆಯೆ ಎಂದು ಯೋಚಿಸಿ ಮಂಡಿಸುವುದು, ಜನರಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರುವುದು ಅವರು ತಮ್ಮ ಕೆಲಸದಲ್ಲಿ ಅಳವಡಿಕೊಂಡ ಒಂದು ಮುಖ್ಯ ಅಂಶ.

ತಂತ್ರಜ್ಞಾನದ ಜಗತ್ತಲ್ಲಿ ಪ್ರಜಾಪ್ರಭುತ್ವ

ಇಡೀ ವಿಶ್ವದ ಎಲ್ಲ ದೇಶಗಳ ಪ್ರಜಾ ಪ್ರಭುತ್ವಗಳು ಇಂದು ತಂತ್ರಜ್ಞಾನದ ಹೊಡೆತಕ್ಕೆ ಸಿಕ್ಕಿ ಅಪಾಯದಲ್ಲಿವೆ. ಇಂದು Post Truth Era (ಸತ್ಯ ನಾಶವಾದ ನಂತರದ ಕಾಲ) ಎಂದು ಕರೆಯಲಾಗುವ, ಸೋಶಿಯಲ್ ಮೀಡಿಯಾ ಸುಳ್ಳು ಸುದ್ದಿ, ತಪ್ಪು ಮಾಹಿತಿಯಿಂದ ಪ್ರಜಾ ಪ್ರಭುತ್ವಗಳು ಹಾನಿಗೆ ಒಳಗಾದ ಸಮಯದಲ್ಲಿ, ಅದರ ಬಗ್ಗೆ ಅರಿವು ಮೂಡಿಸಲು ಮೊದಲು ಮಾಡಿದ ಹಲವರಲ್ಲಿ ಸೂರ್ಯ ಒಬ್ಬರು. 


ಚುನಾವಣೆಗಳಿಗೆ ಅತಿಯಾಗಿ ಬಳಕೆಯಾಗುವ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ (Fake News), ತಪ್ಪು ಮಾಹಿತಿ (Misinformation), ಉದ್ದೇಶಿತ ತಪ್ಪು ಮಾಹಿತಿ (Disinformation), ಅಲ್ಲದೆ ಜನರ, ಮಹಿಳೆಯರ ಮೇಲೆ ಟ್ರೋಲಿಂಗ್ ಹೆಚ್ಚಿರುವ ಸಮಯ ನಿರಂತರವಾಗಿ, ಸಾಮಾಜಿಕ ಮತ್ತು ಕಾನೂನು ಪ್ರಕಾರದ ಹೋರಾಟಗಳಲ್ಲಿ, ಡಿಜಿಟಲ್ ಮಾಧ್ಯಮಗಳ ಮೂಲಕ ಹಾಗೂ ನೇರವಾಗಿ ಸೂರ್ಯ ತೊಡಗಿಸಿ ಕೊಂಡಿದ್ದಾರೆ.

Untitled

ಸುದ್ದಿ ಮಾಧ್ಯಮಗಳಲ್ಲಿ

InShot_20230112_054227624_edited.png

ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ವಿಭಾಗದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಸೂರ್ಯ, ಪಕ್ಷದ ಹಲವಾರು ಸಂಘಟನೆ ಕಾರ್ಯಕ್ರಮಗಳು ಮತ್ತು ಹೋರಾಟಗಳಲ್ಲಿ ಎಲ್ಲ ನೇರವಾಗಿ ಕಾರ್ಯಕರ್ತರ ಜೊತೆ ಕೆಲಸ ಮಾಡುವುದು ಅವರ ಕೆಲಸದ ಒಂದು ಭಾಗವಾಗಿದೆ.

ಕಾಂಗ್ರೆಸ್ ಪಕ್ಷದ ವಕ್ತಾರರು ಮತ್ತು ಜನರು ಗುರುತಿಸಿದ ನ್ಯಾಯವಾದಿಗಳು ಆಗಿರುವ ಸೂರ್ಯ, ಕರ್ನಾಟಕದ ಜನರಿಗೆ ಮಾಧ್ಯಮಗಳ ಮೂಲಕ ಪರಿಚಿತರು. ತಾವು ಭಾಗವಹಿಸುವ ಕಾರ್ಯಕ್ರಮಗಳಲ್ಲಿ, ನಮ್ಮ ನಾಡಿನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಮಸ್ಯೆಗಳ ಬಗೆಹರಿಸಲು, ಜನರಲ್ಲಿ ಸಾಂವಿಧಾನಿಕ ಹಕ್ಕಿನ ಬಗ್ಗೆ ಅರಿವು ಮತ್ತು ವೈಜ್ಞಾನಿಕ ದೃಷ್ಟಿಕೋನ ಮೂಡಿಸುವುದು ಅವರ ಆದ್ಯತೆಗಳಲ್ಲಿ ಒಂದಾಗಿದೆ.

IMG-20230111-WA0083_edited.png
siddaramaiah_case_edited_edited_edited.p

ಕೆಪಿಸಿಸಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿಗಳಾಗಿ ಹಾಗು ಮಾದ್ಯಮ ವಕ್ತಾರರಾಗಿ, ಪ್ರಸಕ್ತ ವಿದ್ಯಮಾನ ಹಾಗು ಸುದ್ದಿಗಳನ್ನು ಸಾಮಾಜಿಕ ಕಾಳಜಿಯ ಜೊತೆ ಗಮನಿಸುವ ಸೂರ್ಯ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ ವಾಹಿನಿಗಳಲ್ಲಿ, ರಾಜ್ಯ ಸರ್ಕಾರ ಹಾಗು ಆಡಳಿತ ವ್ಯವಸ್ಥೆಯ ಬಗ್ಗೆ ಹರಡುವ ಸುಳ್ಳು ಸುದ್ದಿಗಳ ವಿರುದ್ಧ ಕಾನೂನು ಹೋರಾಟದಲ್ಲಿ ಹಾಗು ಪ್ರತಿಕ್ರಿಯೆ ನೀಡುವುದರಲ್ಲಿ ಕೂಡ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 

ಚುನಾವಣಾ ರಾಜಕೀಯಕ್ಕೆ ಪ್ರವೇಶ

ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗ ಬಯಸಿ ಅರ್ಜಿ ಸಲ್ಲಿಸಿದ ಸೂರ್ಯ ಮುಕುಂದರಾಜ್.

Screenshot_20230110-060517.jpg
ತುಮಕೂರು ಗ್ರಾಮಾಂತರ 
ಇತರೆ ಚಿತ್ರಗಳು

ಸಂಪರ್ಕಿಸಿ

ಸೂರ್ಯ ಅವರ ಬಗ್ಗೆ ತಿಳಿಯುವ ಅಥವಾ ತಲುಪುವ ನಿಮ್ಮ ಆಸಕ್ತಿಗೆ ಧನ್ಯವಾದಗಳು. ನೀವು ಈ ಕೆಳಗಿನ ಈಮೇಲ್, ಫೋನ್ ನಂಬರ್ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ತಲುಪಬಹುದು. ಅಲ್ಲದೆ ಈ ವೆಬ್ಸೈಟ್ ನ ಕಾಂಟ್ಯಾಕ್ಟ್ ಫಾರ್ಮ್ ಮುಖಾಂತರ ಕೂಡ ತಲುಪಬಹುದು.

+91-9620838498

  • Facebook
  • Twitter
  • Instagram

ನಮ್ಮನ್ನು ತಲುಪಿದ್ದಕ್ಕೆ ಧನ್ಯವಾದಗಳು.

Thanks for submitting!

Untitled

ಸೂರ್ಯ ಮುಕುಂದರಾಜ್ / SURYA MUKUNDARAJ

©2025 by Surya Mukundaraj.

bottom of page